೧) ಮೌರ್ಯರು
☛ ಕರ್ನಾಟಕವು ಕ್ರಿ.ಪೂ. 3ನೇ ಶತಮಾನದಲ್ಲಿ ಮೌರ್ಯರ ಆಡಳಿತಕ್ಕೆ ಒಳಪಟ್ಟಿತ್ತು.
☛ ಅಶೋಕನ (ಕ್ರಿ.ಪೂ. 273-233) ಶಾಸನಗಳು ಕರ್ನಾಟಕದ 11 ಸ್ಥಳಗಳಲ್ಲಿ ದೊರೆತಿವೆ.
☛ ಚಂದ್ರಗುಪ್ತ ಮೌರ್ಯನು ಭದ್ರಬಾಹುವಿನೊಡನೆ ಶ್ರವಣಬೆಳಗೊಳದಲ್ಲಿ ನೆಲೆಸಿದ್ದನು.
☛ ಅಶೋಕನ ಪ್ರಾಂತ್ಯ ರಾಜಧಾನಿಗಳು : ಸುವರ್ಣಗಿರಿ, ಇಸಿಲ, ತೊಸಿಲ, ಸಂಪ
☛ ಅಶೋಕನ ಶಾಸನಗಳು ದೊರೆತ ಸ್ಥಳಗಳು :
• ಬ್ರಹ್ಮಗಿರಿ, ಸಿದ್ದಾಪುರ, ಜಿ. ರಾಮೇಶ್ವರ
• ಗವಿಮಠ, ಮಾಸ್ಕಿ, ಪಾಲ್ಕಿಗುಂಡು, ಕೊಪ್ಪಳ
• ಸನ್ನತಿ
• ನಿಟ್ಟೂರು, ಉದೇಗೊಳ್ಳಂ
೨) ಶಾತವಾಹನರು (ಕ್ರಿ.ಪೂ. 238 - ಕ್ರಿ.ಶ 225)
☛ ಮೌರ್ಯರ ನಂತರ ಸ್ವತಂತ್ರರಾಗಿ ಆಳ್ವಿಕೆ ನಡೆಸಿದರು.
☛ ರಾಜಧಾನಿ : ಪೈತಾನ್ / ಪ್ರತಿಷ್ಠಾನ
☛ ಲಾಂಛನ : ವರುಣ
☛ ಕ್ರಿ.ಶ 78ರಲ್ಲಿ ಶಾಲಿವಾಹನ ಶಕೆಯನ್ನು ಆರಂಭಿಸಿದರು.
☛ ಮೂಲ ಪುರುಷ : ಸಿಮುಖ
☛ ಪ್ರಮುಖ ದೊರೆ : ಗೌತಮಿಪುತ್ರ ಶಾತಕರ್ಣಿ
೩) ಬನವಾಸಿಯ ಕದಂಬರು (ಕ್ರಿ.ಶ 345 - 540)
☛ ಸ್ಥಾಪಕ : ಮಯೂರವರ್ಮ / ಮಯೂರಶರ್ಮ
☛ ರಾಜಧಾನಿ : ಬನವಾಸಿ
☛ ಬನವಾಸಿಯ ಮತ್ತೊಂದು ಹೆಸರುಗಳು : ವನವಾಸಿ, ವೈಜಯಂತಿ
☛ ಲಾಂಛನ : ಸಿಂಹ
☛ ಕದಂಬರಲ್ಲಿ ಹಾನಗಲ್, ಚಂದಾವರ, ಗೋವೇ ಎಂಬ ಮೂರು ಶಾಖೆಗಳಿದ್ದವು.
☛ ಕಾಕುತ್ಸವರ್ಮನ ಹಲ್ಮಿಡಿ ಶಾಸನ ಕನ್ನಡದ ಪ್ರಪ್ರಥಮ ಶಾಸನವಾಗಿದೆ.
೪) ತಲಕಾಡಿನ ಗಂಗರು (ಕ್ರಿ.ಶ 350 - 999)
☛ ಸ್ಥಾಪಕರು : ದಡಿಗ ಮತ್ತು ಮಾದವ
☛ ಮೊದಲ ರಾಜಧಾನಿ : ಕುವಲಾಲ
☛ ಎರಡನೇ ರಾಜಧಾನಿ : ತಲಕಾಡು
☛ ಲಾಂಛನ : ಆನೆ (ಮದಗಜ)
☛ ಪ್ರಸಿದ್ಧ ದೊರೆ : ದುರ್ವಿನೀತ
☛ ಚಾವುಂಡರಾಯನು ಬಾಹುಬಲಿ ವಿಗ್ರಹವನ್ನು ಕೆತ್ತಿಸಿದನು.
೫) ಬಾದಾಮಿಯ ಚಾಲುಕ್ಯರು (ಕ್ರಿ.ಶ 500 - 757)
☛ ಸ್ಥಾಪಕ : ಜಯಸಿಂಹ
☛ ರಾಜಧಾನಿ : ಬಾದಾಮಿ / ವಾತಾಪಿ
☛ ಪ್ರಮುಖ ದೊರೆ : ಇಮ್ಮಡಿ ಪುಲಕೇಶಿ
☛ ರಾಜಲಾಂಛನ : ವರಹ
☛ ಹ್ಯೂಯನ್ ತ್ಸಾಂಗ್ ಇವರ ಆಸ್ಥಾನಕ್ಕೆ ಭೇಟಿ ನೀಡಿದ್ದನು.
☛ ಐಹೊಳೆಯನ್ನು “ಭಾರತೀಯ ದೇವಾಲಯ ವಾಸ್ತುಶಿಲ್ಪದ ತೊಟ್ಟಿಲು” ಎನ್ನುವರು.
೬) ಮಾನ್ಯಖೇಟದ ರಾಷ್ಟ್ರಕೂಟರು
☛ ಸ್ಥಾಪಕ : ದಂತಿದುರ್ಗ
☛ ರಾಜಧಾನಿ : ಮಾನ್ಯಖೇಟ / ಮಾಲಖೇಡ
☛ ಲಾಂಛನ : ಗರುಡ
☛ ಪ್ರಸಿದ್ಧ ದೊರೆ : ಅಮೋಘವರ್ಷ ನೃಪತುಂಗ
☛ ಅರಬ್ ಪ್ರವಾಸಿ ಸುಲೈಮಾನ್ ಇವನ ಆಸ್ಥಾನಕ್ಕೆ ಭೇಟಿ ನೀಡಿದ್ದನು.
೭) ಕಲ್ಯಾಣದ ಚಾಲುಕ್ಯರು
☛ ಸ್ಥಾಪಕ : ಇಮ್ಮಡಿ ತೈಲಪ
☛ ರಾಜಧಾನಿ : ಕಲ್ಯಾಣ
☛ ಪ್ರಮುಖ ದೊರೆ : 6ನೇ ವಿಕ್ರಮಾದಿತ್ಯ
೮) ಕಲ್ಯಾಣಿಯ ಕಲಚೂರಿಗಳು
☛ ಪ್ರಮುಖ ದೊರೆ : ಬಿಜ್ಜಳ
☛ ಬಸವಣ್ಣ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು.
೯) ದ್ವಾರಸಮುದ್ರದ ಹೊಯ್ಸಳರು
☛ ಮೂಲ ಪುರುಷ : ಸಳ
☛ ರಾಜಧಾನಿ : ಹಳೇಬೀಡು / ದ್ವಾರಸಮುದ್ರ
☛ ಪ್ರಮುಖ ದೊರೆ : ವಿಷ್ಣುವರ್ಧನ / ಬಿಟ್ಟಿದೇವ
☛ ಬೇಲೂರಿನ ಚೆನ್ನಕೇಶವ ಹಾಗೂ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಗಳು ಇವರ ಕೊಡುಗೆ.
೧೦) ವಿಜಯನಗರ ಸಾಮ್ರಾಜ್ಯ
☛ ಹಕ್ಕ-ಬುಕ್ಕ ಸಹೋದರರು ವಿದ್ಯಾರಣ್ಯರ ಸಹಾಯದಿಂದ ಸ್ಥಾಪಿಸಿದರು.
☛ ರಾಜಧಾನಿ : ಹಂಪಿ
☛ ಪ್ರಮುಖ ದೊರೆ : ಕೃಷ್ಣದೇವರಾಯ
☛ 1565ರ ತಾಳೀಕೋಟೆ ಯುದ್ಧದಿಂದ ಪತನವಾಯಿತು.
೧೧) ಬಹಮನಿ ಸಾಮ್ರಾಜ್ಯ
☛ ಸ್ಥಾಪಕ : ಅಲ್ಲಾವುದ್ದೀನ್ ಹಸನ್ ಬಹಮನ್ ಷಾ
☛ ರಾಜಧಾನಿಗಳು : ಗುಲ್ಬರ್ಗಾ ಮತ್ತು ಬೀದರ್