🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಜೂನ್ 1 ರಿಂದ ಶಾಲಾ ಪ್ರಾರಂಭೋತ್ಸವ ಶಿಕ್ಷಣ ಇಲಾಖೆ ಸಕಲ ಸಿದ್ಧತೆ .
🎓 ಕಸ್ತೂರಬಾ ಶಾಲೆಗೆ ಕೌಶಲದ ಬಲ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಬಿಸಿಯೂಟ: ತೊಗರಿ ಬೇಳೆ ಖರೀದಿಗೆ ಅನುಮತಿ.
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Sunday, May 24, 2026

ಕರ್ನಾಟಕವನ್ನಾಳಿದ ಪ್ರಮುಖ ರಾಜಮನೆತನಗಳು

👑 ಕರ್ನಾಟಕವನ್ನಾಳಿದ ಪ್ರಮುಖ ರಾಜಮನೆತನಗಳು 👑

೧) ಮೌರ್ಯರು

☛ ಕರ್ನಾಟಕವು ಕ್ರಿ.ಪೂ. 3ನೇ ಶತಮಾನದಲ್ಲಿ ಮೌರ್ಯರ ಆಡಳಿತಕ್ಕೆ ಒಳಪಟ್ಟಿತ್ತು.

☛ ಅಶೋಕನ (ಕ್ರಿ.ಪೂ. 273-233) ಶಾಸನಗಳು ಕರ್ನಾಟಕದ 11 ಸ್ಥಳಗಳಲ್ಲಿ ದೊರೆತಿವೆ.

☛ ಚಂದ್ರಗುಪ್ತ ಮೌರ್ಯನು ಭದ್ರಬಾಹುವಿನೊಡನೆ ಶ್ರವಣಬೆಳಗೊಳದಲ್ಲಿ ನೆಲೆಸಿದ್ದನು.

☛ ಅಶೋಕನ ಪ್ರಾಂತ್ಯ ರಾಜಧಾನಿಗಳು : ಸುವರ್ಣಗಿರಿ, ಇಸಿಲ, ತೊಸಿಲ, ಸಂಪ

☛ ಅಶೋಕನ ಶಾಸನಗಳು ದೊರೆತ ಸ್ಥಳಗಳು :

• ಬ್ರಹ್ಮಗಿರಿ, ಸಿದ್ದಾಪುರ, ಜಿ. ರಾಮೇಶ್ವರ

• ಗವಿಮಠ, ಮಾಸ್ಕಿ, ಪಾಲ್ಕಿಗುಂಡು, ಕೊಪ್ಪಳ

• ಸನ್ನತಿ

• ನಿಟ್ಟೂರು, ಉದೇಗೊಳ್ಳಂ

೨) ಶಾತವಾಹನರು (ಕ್ರಿ.ಪೂ. 238 - ಕ್ರಿ.ಶ 225)

☛ ಮೌರ್ಯರ ನಂತರ ಸ್ವತಂತ್ರರಾಗಿ ಆಳ್ವಿಕೆ ನಡೆಸಿದರು.

☛ ರಾಜಧಾನಿ : ಪೈತಾನ್ / ಪ್ರತಿಷ್ಠಾನ

☛ ಲಾಂಛನ : ವರುಣ

☛ ಕ್ರಿ.ಶ 78ರಲ್ಲಿ ಶಾಲಿವಾಹನ ಶಕೆಯನ್ನು ಆರಂಭಿಸಿದರು.

☛ ಮೂಲ ಪುರುಷ : ಸಿಮುಖ

☛ ಪ್ರಮುಖ ದೊರೆ : ಗೌತಮಿಪುತ್ರ ಶಾತಕರ್ಣಿ

೩) ಬನವಾಸಿಯ ಕದಂಬರು (ಕ್ರಿ.ಶ 345 - 540)

☛ ಸ್ಥಾಪಕ : ಮಯೂರವರ್ಮ / ಮಯೂರಶರ್ಮ

☛ ರಾಜಧಾನಿ : ಬನವಾಸಿ

☛ ಬನವಾಸಿಯ ಮತ್ತೊಂದು ಹೆಸರುಗಳು : ವನವಾಸಿ, ವೈಜಯಂತಿ

☛ ಲಾಂಛನ : ಸಿಂಹ

☛ ಕದಂಬರಲ್ಲಿ ಹಾನಗಲ್, ಚಂದಾವರ, ಗೋವೇ ಎಂಬ ಮೂರು ಶಾಖೆಗಳಿದ್ದವು.

☛ ಕಾಕುತ್ಸವರ್ಮನ ಹಲ್ಮಿಡಿ ಶಾಸನ ಕನ್ನಡದ ಪ್ರಪ್ರಥಮ ಶಾಸನವಾಗಿದೆ.

೪) ತಲಕಾಡಿನ ಗಂಗರು (ಕ್ರಿ.ಶ 350 - 999)

☛ ಸ್ಥಾಪಕರು : ದಡಿಗ ಮತ್ತು ಮಾದವ

☛ ಮೊದಲ ರಾಜಧಾನಿ : ಕುವಲಾಲ

☛ ಎರಡನೇ ರಾಜಧಾನಿ : ತಲಕಾಡು

☛ ಲಾಂಛನ : ಆನೆ (ಮದಗಜ)

☛ ಪ್ರಸಿದ್ಧ ದೊರೆ : ದುರ್ವಿನೀತ

☛ ಚಾವುಂಡರಾಯನು ಬಾಹುಬಲಿ ವಿಗ್ರಹವನ್ನು ಕೆತ್ತಿಸಿದನು.

೫) ಬಾದಾಮಿಯ ಚಾಲುಕ್ಯರು (ಕ್ರಿ.ಶ 500 - 757)

☛ ಸ್ಥಾಪಕ : ಜಯಸಿಂಹ

☛ ರಾಜಧಾನಿ : ಬಾದಾಮಿ / ವಾತಾಪಿ

☛ ಪ್ರಮುಖ ದೊರೆ : ಇಮ್ಮಡಿ ಪುಲಕೇಶಿ

☛ ರಾಜಲಾಂಛನ : ವರಹ

☛ ಹ್ಯೂಯನ್ ತ್ಸಾಂಗ್ ಇವರ ಆಸ್ಥಾನಕ್ಕೆ ಭೇಟಿ ನೀಡಿದ್ದನು.

☛ ಐಹೊಳೆಯನ್ನು “ಭಾರತೀಯ ದೇವಾಲಯ ವಾಸ್ತುಶಿಲ್ಪದ ತೊಟ್ಟಿಲು” ಎನ್ನುವರು.

೬) ಮಾನ್ಯಖೇಟದ ರಾಷ್ಟ್ರಕೂಟರು

☛ ಸ್ಥಾಪಕ : ದಂತಿದುರ್ಗ

☛ ರಾಜಧಾನಿ : ಮಾನ್ಯಖೇಟ / ಮಾಲಖೇಡ

☛ ಲಾಂಛನ : ಗರುಡ

☛ ಪ್ರಸಿದ್ಧ ದೊರೆ : ಅಮೋಘವರ್ಷ ನೃಪತುಂಗ

☛ ಅರಬ್ ಪ್ರವಾಸಿ ಸುಲೈಮಾನ್ ಇವನ ಆಸ್ಥಾನಕ್ಕೆ ಭೇಟಿ ನೀಡಿದ್ದನು.

೭) ಕಲ್ಯಾಣದ ಚಾಲುಕ್ಯರು

☛ ಸ್ಥಾಪಕ : ಇಮ್ಮಡಿ ತೈಲಪ

☛ ರಾಜಧಾನಿ : ಕಲ್ಯಾಣ

☛ ಪ್ರಮುಖ ದೊರೆ : 6ನೇ ವಿಕ್ರಮಾದಿತ್ಯ

೮) ಕಲ್ಯಾಣಿಯ ಕಲಚೂರಿಗಳು

☛ ಪ್ರಮುಖ ದೊರೆ : ಬಿಜ್ಜಳ

☛ ಬಸವಣ್ಣ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು.

೯) ದ್ವಾರಸಮುದ್ರದ ಹೊಯ್ಸಳರು

☛ ಮೂಲ ಪುರುಷ : ಸಳ

☛ ರಾಜಧಾನಿ : ಹಳೇಬೀಡು / ದ್ವಾರಸಮುದ್ರ

☛ ಪ್ರಮುಖ ದೊರೆ : ವಿಷ್ಣುವರ್ಧನ / ಬಿಟ್ಟಿದೇವ

☛ ಬೇಲೂರಿನ ಚೆನ್ನಕೇಶವ ಹಾಗೂ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಗಳು ಇವರ ಕೊಡುಗೆ.

೧೦) ವಿಜಯನಗರ ಸಾಮ್ರಾಜ್ಯ

☛ ಹಕ್ಕ-ಬುಕ್ಕ ಸಹೋದರರು ವಿದ್ಯಾರಣ್ಯರ ಸಹಾಯದಿಂದ ಸ್ಥಾಪಿಸಿದರು.

☛ ರಾಜಧಾನಿ : ಹಂಪಿ

☛ ಪ್ರಮುಖ ದೊರೆ : ಕೃಷ್ಣದೇವರಾಯ

☛ 1565ರ ತಾಳೀಕೋಟೆ ಯುದ್ಧದಿಂದ ಪತನವಾಯಿತು.

೧೧) ಬಹಮನಿ ಸಾಮ್ರಾಜ್ಯ

☛ ಸ್ಥಾಪಕ : ಅಲ್ಲಾವುದ್ದೀನ್ ಹಸನ್ ಬಹಮನ್ ಷಾ

☛ ರಾಜಧಾನಿಗಳು : ಗುಲ್ಬರ್ಗಾ ಮತ್ತು ಬೀದರ್

Choose Language / ಭಾಷೆ ಆಯ್ಕೆ ಮಾಡಿ

BILINGUAL RESOURCE CENTER

LATEST UPDATES ಪಡೆಯಲು ನಿಮ್ಮ WhatsApp Group ಗೆ ಈ Number Add ಮಾಡಲು ವಿನಂತಿ
7892961850
✅ Number Copied Successfully

Blog Archive