ಕನ್ನಡ ವ್ಯಾಕರಣ ಮತ್ತು ಲಕ್ಷಣ ಗ್ರಂಥಗಳು
ಲಕ್ಷಣ ಗ್ರಂಥಗಳ ಪರಿಚಯ
ವ್ಯಾಕರಣ, ಛಂದಸ್ಸು ಮತ್ತು ಅಲಂಕಾರಗಳನ್ನೊಳಗೊಂಡ ಗ್ರಂಥಕ್ಕೆ "ಲಕ್ಷಣ ಗ್ರಂಥ" ಎನ್ನುವರು.
- ವ್ಯಾಕರಣ: ಭಾಷೆಯ ಸ್ವರೂಪ ಮತ್ತು ಉಚ್ಚಾರಣೆಗಳ ನಿಯಮಗಳನ್ನು ತಿಳಿಸುವ ಶಾಸ್ತ್ರ.
- ಛಂದಸ್ಸು: ಕಾವ್ಯರಚನೆಯ ಸೊಬಗನ್ನು ಸೂತ್ರ ರೂಪದಲ್ಲಿ ತಿಳಿಸುವ ಶಾಸ್ತ್ರ.
- ಅಲಂಕಾರ: ಕಾವ್ಯದ ಶಬ್ದ ಮತ್ತು ಅರ್ಥಗಳನ್ನು ಶೋಭಿಸುವಂತೆ ಮಾಡುವ ಶಾಸ್ತ್ರ.
ಪ್ರಮುಖ ವೈಯಾಕರಣಿಗಳು
1. ಇಮ್ಮಡಿ ನಾಗವರ್ಮ (11ನೇ ಶತಮಾನ)
ಕೃತಿಗಳು: ಕರ್ನಾಟಕ ಭಾಷಾ ಭೂಷಣ, ಕಾವ್ಯಾವಲೋಕನ, ವರ್ಧಮಾನ ಪುರಾಣ, ಅಭಿದಾನ ವಸ್ತು ಕೋಶ, ಛಂದೋ ವಿಚಿತಿ.
2. ಕೇಶಿರಾಜ (13ನೇ ಶತಮಾನ - 1260)
ಶ್ರೇಷ್ಠ ಕೃತಿ: ಶಬ್ದಮಣಿದರ್ಪಣ (8 ಭಾಗಗಳನ್ನು ಒಳಗೊಂಡಿದೆ). ಇವರನ್ನು ಕನ್ನಡದ ಶ್ರೇಷ್ಠ ವೈಯಾಕರಣಿ ಎಂದು ಕರೆಯುತ್ತಾರೆ.
3. ಭಟ್ಟಾಕಳಂಕ (16-17ನೇ ಶತಮಾನ)
ಕೃತಿ: ಶಬ್ದಾನುಶಾಸನ (ಇದು ಸಂಸ್ಕೃತ ಭಾಷೆಯಲ್ಲಿದೆ).