🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Sunday, May 24, 2026

ಛಂದಸ್ಸು ಮತ್ತು ಛಂದೋಗ್ರಂಥಗಳು

✨ ಛಂದಸ್ಸು ಮತ್ತು ಛಂದೋಗ್ರಂಥಗಳು ✨

📘 ಛಂದಸ್ಸು

ಕನ್ನಡ ಭಾಷೆಯ ಪದ್ಯಸಾಹಿತ್ಯದಲ್ಲಿ ಬಹಳ ಹಿಂದಿನಿಂದಲೂ ಬಳಕೆಯಾಗುತ್ತಿರುವ ಸಂಸ್ಕೃತ ಮತ್ತು ಪ್ರಾಕೃತ ಪ್ರಭಾವದ ಪದ್ಯಜಾತಿಗಳು, ತ್ರಿಪದಿ, ಷಟ್ಪದಿ ಮೊದಲಾದ ಅಚ್ಚಕನ್ನಡ ಮಟ್ಟುಗಳು ಹಾಗೂ ಹೊಸಗನ್ನಡ ಕವಿತೆಯ ಮಟ್ಟುಗಳನ್ನೆಲ್ಲ ಕನ್ನಡ ಛಂದಸ್ಸು ಎಂಬ ಪದ ಒಳಗೊಂಡಿದೆ.

📚 ಕನ್ನಡ ಛಂದಸ್ಸನ್ನು ಕುರಿತ ಗ್ರಂಥಗಳು

ಕವಿರಾಜಮಾರ್ಗ (ಕ್ರಿ.ಶ.ಸು. 850) ಗ್ರಂಥದಲ್ಲಿಯೇ ಯತಿ, ಪ್ರಾಸ, ಗುರು-ಲಘು ದೋಷಗಳು, ಛಂದೋಭಂಗ ಮೊದಲಾದ ಛಂದಸ್ಸಿನ ಅಂಶಗಳ ಪ್ರಸ್ತಾಪವಿದೆ.

ತಮಿಳಿನ ಯಾಪ್ಪರುಂಗಲಕ್ಕಾರಿಹೈ ಗ್ರಂಥದಲ್ಲಿ ಗುಣಗಾಂಕಿಯಂ ಎಂಬ ಕನ್ನಡ ಛಂದೋಗ್ರಂಥದ ಉಲ್ಲೇಖವಿದೆ.

1ನೇ ನಾಗವರ್ಮ ರಚಿಸಿದ ಛಂದೋಂಬುಧಿ ಕನ್ನಡದ ಅತ್ಯಂತ ಪ್ರಾಚೀನ ಹಾಗೂ ಪ್ರಸಿದ್ಧ ಛಂದೋಗ್ರಂಥವಾಗಿದೆ.

2ನೇ ನಾಗವರ್ಮ ರಚಿಸಿದ ಛಂದೋವಿಚಿತಿ ಗ್ರಂಥವು ಈಗ ಲಭ್ಯವಿಲ್ಲ.

ಈಶ್ವರ ಕವಿ ರಚಿಸಿದ ಕವಿಜಿಹ್ವಾಬಂಧನಂ ಛಂದಶಾಸ್ತ್ರದ ಪ್ರಮುಖ ಕೃತಿಯಾಗಿದೆ.

ಗುಣಚಂದ್ರ ರಚಿಸಿದ ಛಂದಸ್ಸಾರ ಗ್ರಂಥವು ಸಂಸ್ಕೃತ ಛಂದಸ್ಸಿನ ವಿವರಣೆ ನೀಡುತ್ತದೆ.

ಶಾಲ್ಯದ ಕೃಷ್ಣರಾಜ ರಚಿಸಿದ ಷಟ್ಪ್ರತ್ಯಯ ಪ್ರಸ್ತಾರ ಮೊದಲಾದ ಆರು ಪ್ರತ್ಯಯಗಳನ್ನು ವಿವರಿಸುತ್ತದೆ.

ನಂದಿ ಛಂದಸ್ಸು 19ನೇ ಶತಮಾನದ ಅಸಮಗ್ರ ಛಂದೋಗ್ರಂಥವಾಗಿದೆ.

📖 ಛಂದಸ್ಸಿನ ಪ್ರಮುಖ ಅಂಶಗಳು

ಪ್ರಾಸ : ಒಂದು ನಿರ್ದಿಷ್ಟ ವ್ಯಂಜನವು ಪದ್ಯದ ಸಾಲುಗಳಲ್ಲಿ ಆದಿ, ಮಧ್ಯ ಅಥವಾ ಅಂತ್ಯದಲ್ಲಿ ನಿಯತವಾಗಿ ಬರುವುದೇ ಪ್ರಾಸ.

ಯತಿ : ಕಾವ್ಯವನ್ನು ಓದುವಾಗ ಅರ್ಥಕ್ಕೆ ಅಡ್ಡಿಯಾಗದಂತೆ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ತಾಣ.

ಗಣ : ಕೆಲವು ನಿಯಮಗಳ ಪ್ರಕಾರ ವಿಂಗಡಿಸಿದ ಅಕ್ಷರಗಳ ಗುಂಪು.

ಮಾತ್ರಾಗಣ : ಮಾತ್ರೆಗಳ ಆಧಾರದಿಂದ ಮಾಡುವ ಗಣ ವಿಭಾಗ.

ಮಾತ್ರೆ : ಒಂದು ಅಕ್ಷರವನ್ನು ಉಚ್ಚರಿಸಲು ಬೇಕಾದ ಕಾಲ.

ಲಘು : ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರ. (U)

ಗುರು : ಎರಡು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರ. (–)

ಪ್ರಸ್ತಾರ : ಲಘು-ಗುರುಗಳನ್ನು ಗುರುತಿಸುವ ಕ್ರಿಯೆ.

🏆 ಛಂದಸ್ಸಿನ ಕೃತಿಗಳು

1) 1ನೇ ನಾಗವರ್ಮ – ಛಂದೋಬುದಿ
2) 2ನೇ ನಾಗವರ್ಮ – ಛಂದೋವಿಚಿತಿ
3) ಜಯಕೀರ್ತಿ – ಛಂದೋನುಶಾಸನಂ
4) 2ನೇ ಸೋಮೇಶ್ವರ – ಮನಸೊಲ್ಲಾಸ
5) ಶಾಙ್ರ್ಗದೇವ – ಸಂಗೀತ ರತ್ನಾಕರ
6) ಈಶ್ವರ ಕವಿ – ಕವಿಜಿಹ್ವಾಬಂಧನ
7) ಗುಣಚಂದ್ರ – ಛಂದಸ್ಸಾರ
8) ನಂದಿ – ನಂಧಿಛಂದಸ್ಸು
9) ಖ.ಎಸ್. ಕರ್ಕಿ – ಕನ್ನಡ ಛಂದೋವಿಕಾಸ
10) ಓ.ವಿ. ಚೆಂಕಟಛಲಶಾಸ್ತ್ರಿ – ಕನ್ನಡ ಛಂದಸ್ಸು : ಸ್ವರೂಪ
11) ತೀ.ನಂ.ಶ್ರೀ – ಹೊಸಗನ್ನಡ ಛಂದಸ್ಸು
12) ಬಿ.ಎಂ.ಶ್ರೀ – ಕನ್ನಡ ಛಂದಸ್ಸಿನ ಚರಿತ್ರೆ
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive