(Kannada Literature)
• ಪೆತ್ತಜಯನ್ ಎಂಬ ಪದವು ಹಲ್ಮಿಡಿ ಶಾಸನದಲ್ಲಿದ್ದು ಇದು ಸಮಾಸಪದವಾಗಿದೆ
• ಕನ್ನಡ ಛಂದಸ್ಸಿನ ತಾಯಿಬೇರು – ತ್ರಿಪದಿ
• ಛಂದೋನುಶಾಸನದ ಕರ್ತೃ – ಜಯಕಿರ್ತ
• ಕವಿರಾಜಮಾರ್ಗದ ಆಕರ – ದಂಡಿಯ ಕಾವಾಯದರ್ಶಿ
• “ನಾಡವರ್ಗಳ್ ನಿಜವಾಗಿಯೂ ಚದುರರ್ ಕುರಿತೋದಯೊ ಕಾವ್ಯ ಪ್ರಯೋಗಪರಿಣಿತಮತಿಗಳ್” ಎಂಬ ಸ್ತುತಿ ವಾಕ್ಯವು – ಕವಿರಾಜಮಾರ್ಗದಲ್ಲಿದೆ
• ಬೃಹತ್ಕಥೆಯ ಕರ್ತೃ – ಗುಣಾಢ್ಯ
• ಬೃಹತ್ಕಥೆಯ ಭಾಷೆ – ಪೈಶಾಚಿ
• ಕವಿರಾಜಮಾರ್ಗವು – ಲಕ್ಷಣಗ್ರಂಥ / ಅಲಂಕಾರಗ್ರಂಥ
• ಕನ್ನಡದ ಮೊದಲನೇ ಅಷ್ಟಕ – ಗಜಷ್ಟಾಕ
• “ಕನ್ನಡ ಕವಿತೆಯೊಲ್ ಅಸಗಂ ನೂರ್ಮಡಿ” ಎಂದವರು – ಪೊನ್ನ
• ನಜುಂಡಕವಿಯ ಕೃತಿ – ಕುಮಾರರಾಮನ ಕಥೆ
• ಚಿತ್ತಾಣ ಬೆದಂಡೆಗಳು – ಕಾವ್ಯರೂಪಕಗಳು
• ವಡ್ಡರಾಧನೆಯ ಆಕರ – ಜಿನಸೇನಾಚಾರ್ಯನ ಪೂರ್ವಪುರಾಣ
• ವಡ್ಡರಾಧನೆಯ ಕರ್ತೃ – ಶಿವಕೋಟ್ಯಾಚಾರ್ಯ
• ಪಂಪನಿಗೆ ಆಶ್ರಯ ನೀಡಿದ್ದ ದೊರೆ – ಚಾಲುಕ್ಯದೊರೆ ಅರಿಕೇಸರಿ
• ಪಂಪನ ಧಾರ್ಮಿಕ ಕಾವ್ಯ – ಆದಿಪುರಾಣ (ಕನ್ನಡದ ಮೊದಲ ಕಾವ್ಯ)
• ಪಂಪನ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ಕೃತಿಗಳ ಸ್ವರೂಪ – ಚಂಪೂಕಾವ್ಯ
• ವಿಕ್ರಮಾರ್ಜುನ ವಿಜಯ ಕೃತಿಯ ಮತ್ತೊಂದು ಹೆಸರು – ಪಂಪಭಾರತ
• “ಕವಿತಾಗುಣಾರ್ಣವ ಸಂಸಾರ ಸಾರೋದಯ” ಎಂಬ ಬಿರುದುಳ್ಳ ಕವಿ – ಪಂಪ
• ಪಂಪನು ಬರೆದ ಕಾವ್ಯಗಳ ಶೈಲಿ – ತಿರುಳ್ಗನ್ನಡ
• “ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ” ಎಂದವರು – ಪಂಪ
• ಪಂಪನ ಆದಿಪುರಾಣಕ್ಕೆ ಆಕರ ಗ್ರಂಥ – ಜಿನಸೇನಾಚಾರ್ಯನ ಸಂಸ್ಕೃತದ ಪೂರ್ವಪುರಾಣ
• “ಚಲದೊಳ್ ದುರ್ಯೋಧನಂ...” ಎಂಬ ವರ್ಣನೆಯಿರುವ ಕೃತಿ – ಪಂಪಭಾರತ
• “ಪಸರಿಪ ಕನ್ನಡಕ್ಕೊಡೆಯನೋರ್ವನೆ...” ಎಂದು ಹೇಳಿದವರು – ನಾಗರಾಜ
• ಪಂಪನನ್ನು ಕನ್ನಡ ಕಾಳಿದಾಸ ಎಂದು ಕರೆದವರು – ತೀನಂಶ್ರೀ
• ಪೊನ್ನನ ಪ್ರಸಿದ್ಧ ಕೃತಿ – ಶಾಂತಿ ಪುರಾಣ
• ಭುವನೈಕ ರಾಮಾಭ್ಯದಯ ಗ್ರಂಥದ ಮತ್ತೊಂದು ಹೆಸರು – ರಾಮಕಥೆ
• ಶಾಂತಿಪುರಾಣವು – ೧೯ನೇ ತೀರ್ಥಂಕರ ಶಾಂತಿನಾಥನ ಚರಿತ್ರೆ
• ಪೊನ್ನನಿಗಿದ್ದ ಬಿರುದು – ಕವಿಚಕ್ರವರ್ತಿ
• ರನ್ನನ ತಂದೆ ತಾಯಿ – ಜಿನವಲ್ಲಭ & ಅಬ್ಬಲಬ್ಬೆ
• ರನ್ನನಿಗೆ ಆಶ್ರಯ ನೀಡಿದ್ದ ದೊರೆ – ಸತ್ಯಾಶ್ರಯ
• ರನ್ನನ ಕೃತಿಗಳು – ರನ್ನಕಂದ, ಪರುಶುರಾಮಚರಿತೆ, ಸಾಹಸಭೀಮ ವಿಜಯ
• ಸಿಂಹಾವಲೋಕನ ಕ್ರಮದಿಂದ ಕಾವ್ಯವನ್ನು ರೂಪಿಸಿದವನು – ರನ್ನ
• ಚಾವುಂಡರಾಯ ಪುರಾಣಕ್ಕಿರುವ ಮತ್ತೊಂದು ಹೆಸರು – ತ್ರಿಷಷ್ಟಿಲಕ್ಷಣ ಮಹಾಪುರಾಣ
• ಕರ್ನಾಟಕ ಕಾದಂಬರಿಯ ಕರ್ತೃ – ೧ನೇ ನಾಗವರ್ಮ
• ಕನ್ನಡದಲ್ಲಿನ ಮೊದಲ ಛಂದಶಾಸ್ತ್ರ ಗ್ರಂಥ – ಛಂದೋಬುದಿ
• ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ – ಜಾತಕ ತಿಲಕ
• ರಾಮಚಂದ್ರ ಚರಿತ ಪುರಾಣದ ಕರ್ತೃ – ನಾಗಚಂದ್ರ
• ಮಲ್ಲಿನಾಥ ಪುರಾಣ ಬರೆದವರು – ನಾಗಚಂದ್ರ
• ಧರ್ಮಾಮೃತ ಗ್ರಂಥದ ಕರ್ತೃ – ನಯಸೇನ
• ಕನ್ನಡದಲ್ಲಿ ದೊರೆತ ಮೊದಲ ಜೈನ ರಾಮಾಯಣ – ರಾಮಚಂದ್ರಚರಿತ ಪುರಾಣ
• ಅಭಿನವ ಪಂಪ ಎಂದು ಕರೆಸಿಕೊಂಡವರು – ನಾಗಚಂದ್ರ
• ಮೊದಲ ಗೋವೈದ್ಯ ಗ್ರಂಥ ಬರೆದವರು – ಕೀರ್ತಿವರ್ಮ
• ನೇಮಿನಾಥ ಪುರಾಣದ ಆಕರ ಗ್ರಂಥ – ಉತ್ತರ ಪುರಾಣ
• ನೇಮಿನಾಥ ಪುರಾಣದ ಕರ್ತೃ – ಕರ್ಣಪಾರ್ಯ
• ಯೋಗಾಂಗ ತ್ರಿವಿಧಿಯ ಕರ್ತೃ – ಅಕ್ಕಮಹಾದೇವಿ
• ಹರಿಹರನ ಗಿರಿಜಾಕಲ್ಯಾಣ – ಚಂಪೂ ಶೈಲಿಯಲ್ಲಿ ಇದೆ
• ಹರಿಹರನ ಪಂಪಾಶತಕ – ವೃತ್ತ ಛಂದಸ್ಸಿನಲ್ಲಿ ಇದೆ
• ರಾಘವಾಂಕನ ಉದ್ದಂಡ ಷಟ್ಪದಿಯಲ್ಲಿರುವ ಕೃತಿ – ವೀರೇಶ ಚರಿತೆ
• ಅನಂತನಾಥ ಪುರಾಣದ ಕರ್ತೃ – ಜನ್ನ
• ಕೇಶಿರಾಜನ ಶಬ್ದಮಣಿದರ್ಪಣ – ಕಂದಪದ್ಯದಲ್ಲಿದೆ
• ಜನ್ನ ಕವಿಗೆ ಆಶ್ರಯ ನೀಡಿದ ದೊರೆ – ವೀರಬಲ್ಲಾಳ ನರಸಿಂಹ
• ಕನ್ನಡದ ಮೊದಲ ಸಂಕಲನ ಗ್ರಂಥ – ಸೂಕ್ತಿ ಸುಧಾರ್ಣವ
• ಕನ್ನಡದ ಮೊದಲ ವ್ಯಾಕರಣ ಗ್ರಂಥ – ಶಬ್ದಮಣಿದರ್ಪಣ