👑 ಕಲ್ಯಾಣಿ ಚಾಲುಕ್ಯರು
📖 ಪ್ರಸ್ತಾವನೆ
● ಇವರು ರಾಷ್ಟ್ರಕೂಟರ ಆಳ್ವಿಕೆಯನ್ನು ಕೊನೆಗಾಣಿಸಿ ಪ್ರವರ್ಧಮಾನಕ್ಕೆ ಬಂದರು.
● ಇವರನ್ನು “ಪಶ್ಚಿಮದ ಚಾಲುಕ್ಯರು” ಎಂದು ಕರೆಯುತ್ತಾರೆ.
● ಇವರ ಪ್ರಾರಂಭದ ರಾಜಧಾನಿ – ಏತಗಿರಿ / ಪೊಟ್ಟಳಕೆರೆ ಹಾಗೂ ಮಾನ್ಯಖೇಟ.
● ಇವರ ರಾಜ ಲಾಂಛನ – ವರಾಹ.
● ರಾಷ್ಟ್ರಕೂಟರ ಸಾಮಂತರಾಗಿದ್ದ ಎರಡನೇ ತೈಲಪ ಈ ಮನೆತನದ ಮೂಲ ಪುರುಷ.
● ತೈಲಪ ಎರಡನೇ ಕರ್ಕನನ್ನು ಸೋಲಿಸಿ ರಾಜ್ಯ ಸ್ಥಾಪಿಸಿದನು.
📚 ಪ್ರಮುಖ ಆಧಾರಗಳು
● ರನ್ನ – ಅಜಿತನಾಥ ಪುರಾಣ ಮತ್ತು ಗದಾಯುದ್ಧ.
● ಮೂರನೇ ಸೋಮೇಶ್ವರ – ಮಾನಸೋಲ್ಲಾಸ.
● ಬಿಲ್ಹಣ – ವಿಕ್ರಮಾಂಕದೇವ ಚರಿತೆ.
● ವಿಜ್ಞಾನೇಶ್ವರ – ಮಿತಾಕ್ಷರ.
👑 ಪ್ರಮುಖ ರಾಜರು
🔸 ಎರಡನೇ ತೈಲಪ
● ಕಲ್ಯಾಣಿ ಚಾಲುಕ್ಯರ ಸ್ಥಾಪಕ ದೊರೆ.
● ಮಾನ್ಯಖೇಟ ಈತನ ರಾಜಧಾನಿ.
● ಕ್ರಿ.ಶ. 997ರಲ್ಲಿ ಮರಣ ಹೊಂದಿದ.
● ಈತನ ಬಿರುದು – ತ್ರೈಲೋಕಮಲ್ಲ.
🔸 ಆರನೇ ವಿಕ್ರಮಾದಿತ್ಯ
● ಕಲ್ಯಾಣಿ ಚಾಲುಕ್ಯರ ಅತ್ಯಂತ ಪ್ರಸಿದ್ಧ ದೊರೆ.
● ಕ್ರಿ.ಶ. 1076ರಲ್ಲಿ “ಚಾಲುಕ್ಯ ವಿಕ್ರಮ ಶಕೆ” ಸ್ಥಾಪಿಸಿದ.
● ಈತನ ಬಿರುದುಗಳು – ಭುವನೈಕ್ಯಮಲ್ಲ ಮತ್ತು ಪೆರ್ಮಾಚಿದೇವ.
● ಈತನ ದಂಡನಾಯಕ – ಅಚ್ಚುಗಿ.
● ಕರ್ನಾಟಕ ಸರಸ್ವತಿ – ಚಂದ್ರಲಾದೇವಿ.
● ಬಳ್ಳಿಗಾವೆ ಈತನ ಕಾಲದ ಪ್ರಸಿದ್ಧ ವಿದ್ಯಾಕೇಂದ್ರ.
● “ವಿಕ್ರಮಪುರ” ಎಂಬ ನಗರವನ್ನು ನಿರ್ಮಿಸಿದನು.
● ಇಟಗಿಯ ಮಹಾದೇವ ದೇವಾಲಯವನ್ನು “ದೇವಾಲಯಗಳ ಚಕ್ರವರ್ತಿ” ಎಂದು ಕರೆಯುತ್ತಾರೆ.
● ಇಟಗಿಯ ಮಹಾದೇವ ದೇವಾಲಯದ ನಿರ್ಮಾತೃ – ಮಹಾದೇವ ದಂಡಾದೀಶ.
🔸 ಮೂರನೇ ಸೋಮೇಶ್ವರ
● ಆರನೇ ವಿಕ್ರಮಾದಿತ್ಯನ ನಂತರ ಅಧಿಕಾರಕ್ಕೆ ಬಂದನು.
● ಈತನ ಕೃತಿಗಳು – ಮಾನಸೋಲ್ಲಾಸ ಮತ್ತು ವಿಕ್ರಮಾಭ್ಯುದಯ.
● ಮಾನಸೋಲ್ಲಾಸದ ಇನ್ನೊಂದು ಹೆಸರು – ಅಭಿಲಾಷಿತಾರ್ಥ ಚಿಂತಾಮಣಿ.
● ಈತನ ಬಿರುದುಗಳು – ಸರ್ವಜ್ಞ ಚಕ್ರವರ್ತಿ, ಭೂಲೋಕಮಲ್ಲ, ತ್ರಿಭುವನಮಲ್ಲ.
🏛️ ಆಡಳಿತ
● ಮಂತ್ರಿಗಳ ವಿಧಗಳು – ಪ್ರಧಾನ ಮತ್ತು ಮಹಾಪ್ರಧಾನ.
● ಪ್ರಧಾನ ಮಂತ್ರಿಯ ಬಿರುದುಗಳು – ಚೂಡಾಮಣಿ ಮತ್ತು ಅಮಾತ್ಯ ಕೇಸರಿ.
● ಆಡಳಿತದ ಕೊನೆಯ ಘಟಕ – ಗ್ರಾಮ.
● ಗ್ರಾಮದ ಹಿರಿಯ ಬ್ರಾಹ್ಮಣರನ್ನು “ಮಹಾಜನ” ಎಂದು ಕರೆಯುತ್ತಿದ್ದರು.
● ವೈಶ್ಯರನ್ನು – ನಬರ ಎಂದು ಕರೆಯುತ್ತಿದ್ದರು.
● ಭೂಕಂದಾಯ ಲೆಕ್ಕವಿಡುತ್ತಿದ್ದ ಅಧಿಕಾರಿ – ಕಡಿತವರ್ಗಡೆ.
● ಸೈನ್ಯದ ಪ್ರಮುಖ ಕೇಂದ್ರ – ಕೋಟೆಗಳು.
📚 ಕನ್ನಡ ಸಾಹಿತ್ಯ
● ರನ್ನ – ಗದಾಯುದ್ಧ, ಅಜಿತನಾಥಪುರಾಣ.
● ಎರಡನೇ ಚಾವುಂಡರಾಯ – ಲೋಕೋಪಕಾರ.
● ನಾಗವರ್ಮ – ಕರ್ನಾಟಕ ಕದಂಬರಿ, ಛಂದೋಬದಿ.
● ಚಂದ್ರರಾಜ – ಮದನ ತಿಲಕ.
● ಶ್ರೀಧರಚಾರ್ಯ – ಜಾತಕ ತಿಲಕ.
● ಕೀರ್ತಿವರ್ಮ – ಗೋವೈದ್ಯ.
● ದುರ್ಗಸಿಂಹ – ಪಂಚತಂತ್ರ.
📜 ಸಂಸ್ಕೃತ ಸಾಹಿತ್ಯ
● ವಾದಿರಾಜ – ಯಶೋಧರ ಚರಿತೆ, ಪಾರ್ಶ್ವನಾಥ ಚರಿತೆ.
● ಬಿಲ್ಹಣ – ವಿಕ್ರಮಾಂಕ ದೇವಚರಿತ.
● ವಿಜ್ಞಾನೇಶ್ವರ – ಮಿತಾಕ್ಷರ ಸಂಹಿತೆ.
● ಮೂರನೇ ಸೋಮೇಶ್ವರ – ಮಾನಸೋಲ್ಲಾಸ.
● ಜಗದೇಕಮಲ್ಲ – ಸಂಗೀತ ಚೂಡಾಮಣಿ.
✨ Extra Tips
● ಕಲ್ಯಾಣಿ ಚಾಲುಕ್ಯರ ರಾಜಧಾನಿ – ಬಸವಕಲ್ಯಾಣ.
● ಕನ್ನಡದ ಮೊದಲ ಪಶುವೈದ್ಯ ಕೃತಿ – ಗೋವೈದ್ಯ.
● ಕನ್ನಡದ ಮೊದಲ ಜ್ಯೋತಿಷ್ಯ ಶಾಸ್ತ್ರ – ಜಾತಕ ತಿಲಕ.
● ಕನ್ನಡದ ಮೊದಲ ಕಾಮಶಾಸ್ತ್ರ ಗ್ರಂಥ – ಮದನ ತಿಲಕ.
● ಕಲ್ಯಾಣಿ ಚಾಲುಕ್ಯರ ಕೊನೆಯ ದೊರೆ – ಮೂರನೇ ತೈಲಪ.
● ಇವರ ಆಳ್ವಿಕೆಯನ್ನು ಕೊನೆಗಾಣಿಸಿದವನು – ಕಲಚೂರಿ ಬಿಜ್ಜಳ.