🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Saturday, May 23, 2026

ಉತ್ತರ ಭಾರತದ ಪ್ರಮುಖ ನದಿಗಳು

ಭಾರತದ ಪ್ರಮುಖ ನದಿಗಳು

1. ಉತ್ತರ ಭಾರತದ ನದಿಗಳು

ಉತ್ತರ ಭಾರತದ ನದಿಗಳಲ್ಲಿ ಸಿಂಧು ನದಿಯು ಪಶ್ಚಿಮಕ್ಕೆ ಹರಿದರೆ, ಗಂಗಾ, ಯಮುನಾ ಮತ್ತು ಬ್ರಹ್ಮಪುತ್ರ ನದಿಗಳು ಪೂರ್ವಕ್ಕೆ ಹರಿಯುತ್ತವೆ.

  • ಸಿಂಧು ನದಿ: ಕೈಲಾಸ ಪರ್ವತದಲ್ಲಿ ಹುಟ್ಟಿ ಅರಬ್ಬಿ ಸಮುದ್ರ ಸೇರುತ್ತದೆ. ಇದನ್ನು 'ನದಿಗಳ ತಂದೆ' ಎಂದು ಕರೆಯುತ್ತಾರೆ. ಇದರ ಉಪನದಿಗಳಾದ ಜೀಲಂ, ಚೀನಾಬ್, ಸಟ್ಲೇಜ್, ರಾವಿ ಮತ್ತು ಬಿಯಾಸ್ ಹರಿಯುವುದರಿಂದ ಪಂಜಾಬ್ ಅನ್ನು 'ಪಂಚನದಿಗಳ ರಾಜ್ಯ' ಎನ್ನುತ್ತಾರೆ.
  • ಗಂಗಾ ನದಿ: ಇದು ಭಾರತದ ರಾಷ್ಟ್ರೀಯ ನದಿಯಾಗಿದೆ. ಗಂಗೋತ್ರಿಯಲ್ಲಿ ಉಗಮಿಸುತ್ತದೆ. ಇದರ ಡಾಲ್ಫಿನ್‌ಗಳನ್ನು 'ರಾಷ್ಟ್ರೀಯ ಜಲಚರ ಪ್ರಾಣಿ' ಎಂದು ಘೋಷಿಸಲಾಗಿದೆ. ಪ್ರಮುಖ ನಗರಗಳು: ವಾರಣಾಸಿ, ಪಾಟ್ನಾ, ಹರಿದ್ವಾರ, ಋಷಿಕೇಶ.
  • ಯಮುನಾ ನದಿ: ಯಮನೋತ್ರಿಯಲ್ಲಿ ಉಗಮಿಸುತ್ತದೆ. ದೆಹಲಿ, ಆಗ್ರಾ, ಮಥುರಾ ಇದರ ದಡದಲ್ಲಿರುವ ಪ್ರಮುಖ ನಗರಗಳು.
  • ಬ್ರಹ್ಮಪುತ್ರ ನದಿ: ಚಿಮಯುಂಗಡಂಗ್‌ನಲ್ಲಿ ಉಗಮಿಸುತ್ತದೆ. ತಿಸ್ತಾ ನದಿಯು ಇದರ ಉಪನದಿಯಾಗಿದ್ದು, ಇದನ್ನು 'ಸಿಕ್ಕಿಂನ ಜೀವನಾಡಿ' ಎನ್ನುವರು.

2. ದಕ್ಷಿಣ ಭಾರತದ ನದಿಗಳು

ಭಾರತದ ನದಿಗಳನ್ನು ಅವು ಹರಿಯುವ ದಿಕ್ಕಿನ ಆಧಾರದ ಮೇಲೆ ಹೀಗೆ ವಿಂಗಡಿಸಬಹುದು:

ಪಶ್ಚಿಮಕ್ಕೆ ಹರಿದು ಅರಬ್ಬಿ ಸಮುದ್ರ ಸೇರುವ ನದಿಗಳು:

  • ನರ್ಮದಾ: ಅಮರಕಂಟಕದಲ್ಲಿ ಉಗಮಿಸುತ್ತದೆ.
  • ತಪತಿ: ಇದನ್ನು 'ಸೂರ್ಯನ ಮಗಳು' ಎಂದು ಕರೆಯುತ್ತಾರೆ.
  • ಮಹಾದಾಯಿ: ಬೆಳಗಾವಿಯ ಭೀಮಗಡದಲ್ಲಿ ಉಗಮಿಸುತ್ತದೆ, ಇದು ಗೋವಾದ ಜೀವನಾಡಿ.
  • ಶರಾವತಿ: ತೀರ್ಥಹಳ್ಳಿಯ ಅಂಬುತೀರ್ಥದಲ್ಲಿ ಉಗಮಿಸುತ್ತದೆ.
  • ನೇತ್ರಾವತಿ: ಚಿಕ್ಕಮಗಳೂರಿನ ರಾಮನದುರ್ಗದಲ್ಲಿ ಉಗಮಿಸುತ್ತದೆ.
  • ಇತರವು: ಸಾಬರಮತಿ, ಕಾಳಿ, ಲೂನಿ (ಉಗಮ: ಅನಾಸಾಗರ), ಪೆರಿಯಾರ್ (ಕೇರಳದ ಜೀವನಾಡಿ).

ಪೂರ್ವಕ್ಕೆ ಹರಿದು ಬಂಗಾಳ ಕೊಲ್ಲಿ ಸೇರುವ ನದಿಗಳು:

  • ಗೋದಾವರಿ: ಮಹಾರಾಷ್ಟ್ರದ ನಾಸಿಕದಲ್ಲಿ ಉಗಮ. ಇದು ದಕ್ಷಿಣ ಭಾರತದ ಅತಿ ದೊಡ್ಡ ನದಿ.
  • ಕೃಷ್ಣಾ: ಮಹಾಬಲೇಶ್ವರದಲ್ಲಿ ಉಗಮಿಸುತ್ತದೆ.
  • ಕಾವೇರಿ: ಇದನ್ನು 'ದಕ್ಷಿಣದ ಗಂಗೆ' ಎಂದು ಕರೆಯುತ್ತಾರೆ.
  • ಮಹಾನದಿ: ಇದನ್ನು 'ಒಡಿಶಾದ ಜೀವನಾಡಿ' ಹಾಗೂ 'ಒಡಿಶಾದ ಕಣ್ಣೀರಿನ ನದಿ' ಎನ್ನುವರು.
  • ದಾಮೋದರ: ಇದನ್ನು 'ಪಶ್ಚಿಮ ಬಂಗಾಳದ ಕಣ್ಣೀರಿನ ನದಿ' ಎಂದು ಕರೆಯುತ್ತಾರೆ.

ಗಮನಿಸಿ: ಬಿಜಾಪುರ ಜಿಲ್ಲೆಯನ್ನು ಕರ್ನಾಟಕದ 'ಪಂಚನದಿಗಳ ಜಿಲ್ಲೆ' ಎಂದು ಕರೆಯಲಾಗುತ್ತದೆ.

Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive