ಭಾರತದ ಸಂವಿಧಾನದ ಪೀಠಿಕೆ (Preamble)
“ಭಾರತದ ಪ್ರಜೆಗಳಾದ ನಾವು, ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ... ಈ ೧೯೪೯ರ ನವೆಂಬರ್ ಮಾಹೆಯ ೨೬ನೇ ದಿನದಂದು, ನಾವಾಗಿ ನಾವೇ ಈ ಸಂವಿಧಾನವನ್ನು ಸ್ವೀಕರಿಸಿ, ಶಾಸನವನ್ನಾಗಿ ವಿಧಿಸಿಕೊಳ್ಳುತ್ತೇವೆ.”
ಪೀಠಿಕೆಯ ಪ್ರಮುಖ ಪದಗಳ ಅರ್ಥೈಸುವಿಕೆ:
-
೧. ಸಾರ್ವಭೌಮ (Sovereign):
ಭಾರತವು ಆಂತರಿಕವಾಗಿ ಮತ್ತು ಬಾಹ್ಯವಾಗಿ ಸಂಪೂರ್ಣ ಸ್ವತಂತ್ರವಾಗಿದೆ. ಯಾವುದೇ ವಿದೇಶೀ ಶಕ್ತಿಯ ಅಧೀನದಲ್ಲಿಲ್ಲ. -
೨. ಸಮಾಜವಾದಿ (Socialist):
೧೯೭೬ರ ೪೨ನೇ ತಿದ್ದುಪಡಿಯಿಂದ ಸೇರ್ಪಡೆ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಇದರ ಗುರಿ. ಎಲ್ಲರಿಗೂ ಸಮಾನ ಅವಕಾಶ ಮತ್ತು ಯೋಗ್ಯ ಜೀವನಮಟ್ಟ ಕಲ್ಪಿಸುವುದು ಇದರ ಉದ್ದೇಶ. -
೩. ಜಾತ್ಯತೀತ (Secular):
೧೯೭೬ರ ೪೨ನೇ ತಿದ್ದುಪಡಿಯಿಂದ ಸೇರ್ಪಡೆ. ಭಾರತಕ್ಕೆ ಯಾವುದೇ ಅಧಿಕೃತ ಧರ್ಮವಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಧರ್ಮ ಆಚರಿಸುವ ಹಕ್ಕಿದೆ. ಸರ್ಕಾರವು ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುತ್ತದೆ. -
೪. ಪ್ರಜಾಪ್ರಭುತ್ವ (Democratic):
ಸಾರ್ವತ್ರಿಕ ಮತಾಧಿಕಾರದ ಮೂಲಕ (೧೮ ವರ್ಷ ಮೇಲ್ಪಟ್ಟ ಪ್ರಜೆಗಳಿಂದ) ಸರ್ಕಾರವನ್ನು ಆರಿಸುವ ಪದ್ಧತಿ. -
೫. ಗಣತಂತ್ರ (Republic):
ರಾಷ್ಟ್ರದ ಮುಖ್ಯಸ್ಥರು ವಂಶಪಾರಂಪರ್ಯವಾಗಿ ಬರದೇ, ಚುನಾವಣೆಯ ಮೂಲಕ ಆಯ್ಕೆಯಾಗುವ ವ್ಯವಸ್ಥೆ.
ಟಿಪ್ಪಣಿ: ಸಂವಿಧಾನದ ದ್ವಂದ್ವಗಳನ್ನು ನಿವಾರಿಸಲು ಪೀಠಿಕೆಯು ದಿಕ್ಸೂಚಿಯಾಗಿ ಕಾರ್ಯನಿರ್ವಹಿಸುತ್ತದೆ.